ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ: ತಾಯಂದಿರ ಅಭಿಮತ
ಮಕ್ಕಳಿಗೆ ಪ್ರೇರಣೆಯ ಮಾತುಗಳನ್ನಾಡಿದ ಗೃಹೋದ್ಯಮಿ ವಸಂಧರಾ, ಪಿಡಿಓ ಯೋಗಿತಾ
ತಾಯಂದಿರ ಪರವಾಗಿ ಗೃಹೋದ್ಯಮ ನಡೆಸುತ್ತಿರುವ ವಸುಂಧರಾ ಹೆಗಡೆ ಕಾನಳ್ಳಿ ಅವರು ಮಾತನಾಡಿ ಆ ಸಂದರ್ಭಕ್ಕೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬೆಳೆಯಬೇಕು. ಕೊರೋನಾ ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ ತರೆದ ಆನ್ಲೈನ್ ಮಾರುಕಟ್ಟೆ ಅವಕಾಶವನ್ನು ತಾನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿದ್ದುಕೊಂಡೇ ವ್ಯವಹಾರದಲ್ಲಿ ಬೆಳೆದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡು, ಎಲ್ಲ ವಿದ್ಯಾರ್ಥಿಗಳೂ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ತಾಯಂದಿರ ಪ್ರತಿನಿಧಿಯಾಗಿ ಮಾತನಾಡಿದ ಗ್ರಾಮ ಪಂಚಾಯತ ಪಿ.ಡಿ.ಓ. ಆಗಿ ಕಾರ್ಯ ನಿರ್ವಹಿಸುತ್ತಿರುವ ಯೋಗಿತಾ ಹೆಗಡೆ ಅವರು ಶಾಲೆಯಿಂದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ, ಸಂಸ್ಕಾರ ಲಭಿಸುತ್ತಿದೆ. ಸಂಸ್ಕಾರವಂತರಾಗಿ ಬಾಳಬೇಕು ಎಂದರು. ನಿರಂತರವಾಗಿ ನಡೆಸಲ್ಪಡುವ ಕಿರುಪರೀಕ್ಷೆಗಳು ವಿದ್ಯಾರ್ಥಿಗಳ ಓದಿಗೆ ಉತ್ತಮ ರೀತಿಯಲ್ಲಿ ಸಹಕಾರಿ, ಅದನ್ನು ಮುಂದುವರಿಸಬೇಕು ಎಂದರು.
ಸಭೆಯಲ್ಲಿ ಅಧ್ಯಕ್ಷ ಎಂ. ಆರ್. ಹೆಗಡೆ. ಹೊನ್ನೆಕಟ್ಟಾ, ಕಾರ್ಯದರ್ಶಿ ಜಿ.ಎನ್.ಹೆಗಡೆ, ಸದಸ್ಯರಾದ ಎಂ.ವಿ.ಹೆಗಡೆ ಹಲಸಿನಕಟ್ಟಾ ಮತ್ತು ಮುಖ್ಯಾಧ್ಯಾಪಕ ಶೈಲೇಂದ್ರ ಎಂ. ಎಚ್. ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
0 Comments