Hot Posts

6/recent/ticker-posts

ಶಿಕ್ಷಣ ಕ್ಷೇತ್ರಕ್ಕೆ ಲಯನ್ಸ್ ಶಿಕ್ಷಣ ಸಂಸ್ಥೆ ಅತ್ಯುತ್ತಮ ಕೊಡುಗೆ ನೀಡುತ್ತಿದೆ : ಭೀಮಣ್ಣ ನಾಯ್ಕ

 

ಶಿರಸಿ: ಲಯನ್ಸ್ ಕ್ಲಬ್ ಶಿರಸಿ, ಲಯನ್ಸ್ ಎಜುಕೇಶನ್ ಸೊಸೈಟಿ (ರಿ) ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 1-8-2023 ಮಂಗಳವಾರ ಲಯನ್ಸ್ ಸಭಾಭವನದಲ್ಲಿ, 2023-24ರ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ, ಪ್ರತಿಭಾ ಪುರಸ್ಕಾರ ಶಿರಸಿ ಲಯನ್ಸ್ ಅಕಾಡೆಮಿ ಮತ್ತು ಲಯನ್ಸ್ ಕ್ವೆಸ್ಟ್ ಉದ್ಘಾಟನಾ ಸಮಾರಂಭ ನೆರವೇರಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭೀಮಣ್ಣ ನಾಯ್ಕ್, ಶಾಸಕರು ಶಿರಸಿ -ಸಿದ್ದಾಪುರ ವಿಧಾನಸಭಾ ಕ್ಷೇತ್ರ ಇವರು ಉಪಸ್ಥಿತರಿದ್ದರು. ಭೀಮಣ್ಣ ನಾಯ್ಕ್, ಮಾನ್ಯ ಶಾಸಕರು ಶಿರಸಿ -ಸಿದ್ದಾಪುರ ವಿಧಾನಸಭಾ ಕ್ಷೇತ್ರ ಮಾನ್ಯ ಶಾಸಕರು ಮಾತನಾಡುತ್ತಾ, ಶಿಕ್ಷಣ ಕ್ಷೇತ್ರಕ್ಕೆ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯು ಅತ್ಯುತ್ತಮ ಕೊಡುಗೆ ನೀಡುತ್ತಿದೆ. ನಮ್ಮ ಜಿಲ್ಲೆಯ ಪ್ರತಿಭಾನ್ವಿತರಿಗೆ ಶಿರಸಿಯಲ್ಲೆ ಸ್ಫರ್ದಾತ್ಮಕ ಶಿಕ್ಷಣ ನೀಡಲು ಆರಂಭವಾದ ಶಿರಸಿ ಲಯನ್ಸ ಅಕಾಡೆಮಿಗೆ ಶುಭಕೋರಿದರು. ನರ್ಸರಿಯಿಂದ ಪಿ.ಯು.ವರೆಗೆ ಸಮಗ್ರ ಗುಣಾತ್ಮ ಶಿಕ್ಷಣ ಸೇವಾನಿರತ ಲಯನ್ಸ ಸಂಸ್ಥೆ ಬೆಳವಣಿಗೆ ಗೆ ಸಾರ್ವಜನಿಕರು ಜೊತೆ ನಿಲ್ಲಬೇಕು. ಶಿರಸಿ ಕ್ಷೇತ್ರವನ್ನು ಮಾದರಿಯಾಗಿಸುವ ನನ್ನ ಕನಸಿಗೂ ಎಲ್ಲರೂ ಕರಜೋಡಿಸಬೇಕು ಎಂದು ಕರೆನೀಡಿದರು. ಪಂಚಾಯತ್‌ನಿoದ ಹಿಡಿದು ಪಾರ್ಲಿಮೆಂಟ್‌ವರೆಗೆ ಪ್ರಾಮಾಣಿಕ, ಬದ್ದತೆಯಿಂದ ಕಾರ್ಯವನಿರ್ವಹಿಸುವ ಯುವ ಜನಾಂಗ ದೇಶದ ಭದ್ರತೆ, ಪ್ರಗತಿ ಕಾಪಾಡಲು ಅತ್ಯಗತ್ಯ. ವಿದ್ಯಾರ್ಥಿಗಳು ಶೇ 100ಕ್ಕೆ 100 ಪ್ರಯತ್ನ ಹಾಗೂ ಗುರಿ ಸಾಧಿಸುವ ಬಯಕೆ ಹೊಂದಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ, ಎಂದು ವಿದ್ಯಾರ್ಥಿಗಳಿಗೆ ಹಿತನುಡಿದರು. 

 

ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಲ.ಪ್ರೊ.ರವಿನಾಯಕ್ ಪ್ರಾಸ್ತಾವಿಕ ಮಾತನಾಡಿದರು. ಒಎಈ ಲಯನ್ ಪ್ರಭಾಕರ ಹೆಗಡೆ, ಉಪಾಧ್ಯಕ್ಷರು, ಸಿರಸಿಲಯನ್ಸ್ ಎಜ್ಯುಕೇಶನ್ ಸೊಸೈಟ್(ರಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಒಎಈ ಲಯನ್ ಅಶೋಕ ಹೆಗಡೆ ಅಧ್ಯಕ್ಷರು, ಲಯನ್ಸ್ ಕ್ಲಬ್, ಶಿರಸಿ ಲಯನ್ಸ ಕ್ವೆಸ್ಟ್ ಕುರಿತು ಪರಿಚಯಾತ್ಮಕವಾಗಿ ಮಾತನಾಡಿದರು. ಕಾರ್ಯದರ್ಶಿ ಲಯನ್ ಜ್ಯೋತಿ ಅಶ್ವಥ ಹೆಗಡೆ, ಲಯನ್ಸ್ ಕ್ಲಬ್ ಶಿರಸಿ,ಲಯನ್ ವಿನಯ್ ಹೆಗಡೆ ಬಸವನಕಟ್ಟೆ ಸಹ ಕಾರ್ಯದರ್ಶಿ, ಲಯನ್ ಶ್ಯಾಮಸುಂದರ ಭಟ್, ಸದಸ್ಯರು, ಒಎಈ ಲಯನ್ ಶ್ರೀಕಾಂತ್ ಹೆಗಡೆ, ಸದಸ್ಯರು, ಹಾಗೂ ಲಯನ್ಸ್ ಕ್ಲಬ್ ಶಿರಸಿಯ ಸದಸ್ಯರು ಇಂದಿನ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹದಿಹರೆಯದ ಸಮಸ್ಯೆಗಳ ಪರಿಹಾರದ ಬಗ್ಗೆ ಇರುವ ವಿಶೇಷ, ವಿಶಿಷ್ಟ, ರೀತಿಯ ಶಿಕ್ಷಣ ನೀಡುವ ಕ್ವೆಸ್ಟ್ ತರಗತಿಗಳನ್ನು ಉದ್ಘಾಟಿಸಲಾಯಿತು. 2023-24ರ ಸಾಲಿನ ವಿದ್ಯರ‍್ಥಿ ಪ್ರತಿನಿಧಿಗಳ ಅಧ್ಯಕ್ಯನಾದ ಕು.ಕೌಶಿಕ್ ನಾಯ್ಕ, ಉಪ ಅಧ್ಯಕ್ಷನಾದ ವಿಭವ್ ಭಾಗ್ವತ್ ಜೊತೆಗೂಡಿ ಇತರ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶಾಸಕರು ಪ್ರಮಾಣವಚನ ಬೋಧಿಸಿದರು. 2022-23ರ ಸಾಲಿನ ಎಸೆಸೆಲ್ಸಿ ಯಲ್ಲಿ 625 ಅಂಕಗಳಿಗೆ 621 ಅಂಕಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ಲಯನ್ಸ್ ಶಾಲೆಯ ವಿದ್ಯರ‍್ಥಿನಿ ಕುಮಾರಿ ರವೀನಾ ಪನ್ವಾರ್, 2022-23ರ ಸಾಲಿನಲ್ಲಿ, ಸ್ವ ಪ್ರಯತ್ನದಿಂದ ಭುವನೇಶ್ವರ ಐಐಟಿಗೆ ಆಯ್ಕೆಯಾದ ಶಾಲೆಯ ಹಳೆಯ ವಿದ್ಯಾರ್ಥಿ ಸ್ವಸ್ತಿಕ್ ಹೆಗಡೆ, ರೂಟ್ಸ್ ಟು ರೂಟ್ಸ್ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ 10ನೇ ತರಗತಿಯ ವಿದ್ಯರ‍್ಥಿ ಕುಮಾರ ಪೃಥ್ವಿ ಶೆಟ್ಟಿ, ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಲಯನ್ಸ್ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಕುಮಾರ. ಶಿವಪ್ರಸಾದ ಭಟ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ, ದೀಪಾ ಶಶಾಂಕ ಹೆಗಡೆ ಮಾರ್ಗದರ್ಶನರಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರರ‍್ಥನೆ ಗೀತೆಯನ್ನು ಹಾಡಿದರು ಲಯನ್ಸ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶಶಾಂಕ್ ಹೆಗಡೆ ಸ್ವಾಗತಿಸಿದರು. ಲಯನ್ ವಿನಯ್ ಹೆಗಡೆ ಬಸವನ ಕಟ್ಟೆ ಸಹ ಕಾರ್ಯದರ್ಶಿ ವಂದನಾರ್ಪಣೆ ನಡೆಸಿಕೊಟ್ಟರು. ಶಾಲೆಯ ಸಹ ಶಿಕ್ಷಕಿಯರಾದ ಮುಕ್ತಾ ನಾಯ್ಕ್, ಅನಿತಾ ಭಟ್ ನಿರೂಪಿಸಿದರು. ವಿದ್ಯಾರ್ಥಿ ಸಂಸತ್ತಿನ ಮುಖ್ಯ ನಿರ್ವಾಹಕರಾದ ರೇಷ್ಮಾ ಮಿರಾಂದ, ಮತ್ತು ಗೀತಾ ನಾಯ್ಕ್ (ಸಹಶಿಕ್ಷಕಿಯರು) ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ವೃಂದ ಶಾಲಾ ಶಿಕ್ಷಕ-ಶಿಕ್ಷಕೇತರ ಬಳಗ, ಪಾಲಕ ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾದರು.

ಪ್ರತಿಕ್ರಿಯೆ

Post a Comment

0 Comments